Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಅಧಿಕಾರಕ್ಕೇರಲಿರುವ ಬಿಜೆಪಿಗೆ ಹಾದಿ ಸುಗಮವಿಲ್ಲ….

ಅಧಿಕಾರಕ್ಕೇರಲಿರುವ ಬಿಜೆಪಿಗೆ ಹಾದಿ ಸುಗಮವಿಲ್ಲ....
ಅಧಿಕಾರಕ್ಕೇರಲಿರುವ ಬಿಜೆಪಿಗೆ ಹಾದಿ ಸುಗಮವಿಲ್ಲ....
Pratidhvani Dhvani

Pratidhvani Dhvani

July 23, 2019
Share on FacebookShare on Twitter

ಹೌದು, ಕೊನೆಗೂ ಮೈತ್ರಿ ಸರ್ಕಾರ ಉರುಳಿ ಕಳೆದ 14 ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ನಾಟಕದ ಮೊದಲ ಅಂಕಕ್ಕೆ ತೆರೆ ಬಿದ್ದಿದೆ. ಇನ್ನಿರುವುದು ಅಧಿಕಾರಕ್ಕೆ ಬರಲಿರುವ ಬಿಜೆಪಿಯ ‘ಕರ್-ನಾಟಕ’. ಶಾಸಕರಿಂದ ರಾಜಿನಾಮೆ ಕೊಡಿಸಿ ಮೈತ್ರಿ ಸರ್ಕಾರ ಉರುಳಿಸಿದ ಬಿಜೆಪಿ ಮುಂದೆ ಅಂತಹದ್ದೇ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುತ್ತೇನೆ ಎಂದು ಹೇಳಿಕೊಳ್ಳಲು ಬಿಜೆಪಿಯೇನೂ ಸ್ಪಷ್ಟ ಬಹುಮತ ಹೊಂದಿಲ್ಲ. ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿರುವ ಆ ಪಕ್ಷದಲ್ಲೂ ಸಚಿವ ಸ್ಥಾನ ಸೇರಿದಂತೆ ಸ್ಥಾನಮಾನಕ್ಕಾಗಿ ಪೈಪೋಟಿ ನಡೆಯುವುದು ಖಂಡಿತ. ಹೀಗಾಗಿ ಇದುವರೆಗೆ ಮೈತ್ರಿ ಸರ್ಕಾರ ಯಾವ ರೀತಿ ಈ ಅಧಿಕಾರದ ರಾಜಕಾರಣಕ್ಕೆ ಬಳಲಿತ್ತೋ ಅದೇ ರೀತಿ ಬಿಜೆಪಿಯೂ ಬಳಲಬೇಕಾದ ದಿನ ದೂರವಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?

ಒಂದೆಡೆ ಪಕ್ಷ ಕಟ್ಟಿ ಬೆಳೆಸಿ ಅದರೊಂದಿಗೆ ತಾವೂ ಬೆಳೆದು ಅಧಿಕಾರಕ್ಕೆ ಬರುವಂತೆ ಮಾಡಿದವರಿಗೆ ಸರ್ಕಾರ ರಚನೆಯಲ್ಲಿ ಸ್ಥಾನಮಾನ ಕೊಡಲೇ ಬೇಕಾಗುತ್ತದೆ. ಇನ್ನೊಂದೆಡೆ ಅಧಿಕಾರಕ್ಕಾಗಿ ಒಂದು ಸರ್ಕಾರವನ್ನು ಉರುಳಿಸಿ ಬಿಜೆಪಿ ಸೇರಿದವರಿಗೆ ಸ್ಥಾನಮಾನ ನೀಡಲೇಬೇಕಾದ ಅನಿವಾರ್ಯತೆ. ಈ ಎರಡರ ಮಧ್ಯೆ ಸಿಲುಕಿ ಬಿಜೆಪಿ ಸರ್ಕಾರವೂ ಇಕ್ಕಟ್ಟಿಗೆ ಸಿಲುಕಿ ಅಧಿಕಾರ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವವಾದರೆ ಅದು ಅಚ್ಚರಿಯಲ್ಲ.

ರಾಜ್ಯದ ರಾಜಕೀಯ ಇತಿಹಾಸವೇ ಅದನ್ನು ಹೇಳುತ್ತದೆ. ಅದಕ್ಕೆ ಹೆಚ್ಚು ದೂರ ಹೋಗಬೇಕಾಗಿಯೂ ಇಲ್ಲ. 2008ರಲ್ಲಿ 110 ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎದುರಿಸಿದ ಸವಾಲುಗಳೇ ಇದಕ್ಕೆ ಸಾಕ್ಷಿ. ಐವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಅವರಿಗೆ ಸಚಿವ ಸ್ಥಾನ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ, ನಂತರದಲ್ಲಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಂದ ರಾಜಿನಾಮೆ ಕೊಡಿಸಿ ಅವರನ್ನು ಗೆಲ್ಲಿಸಿ ಸ್ಥಾನಮಾನ ನೀಡಿತು.

ಇದಕ್ಕೆ ಸಹಕರಿಸಿದ ಬಳ್ಳಾರಿ ಧಣಿಗಳಿಗೆ ಬೇಕಾದ ಸ್ವಾತಂತ್ರ್ಯ ನೀಡಿದ ಪರಿಣಾಮ ಅಕ್ರಮ ಗಣಿಗಾರಿಕೆಯಂತಹ ಬೃಹತ್ ಅವ್ಯವಹಾರಗಳು ನಡೆಯಿತು. ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಲ್ಲದೆ ಜೈಲಿಗೆ ಹೋಗಬೇಕಾಯಿತು. ನಂತರ ಕಾನೂನು ಹೋರಾಟದಲ್ಲಿ ಯಡಿಯೂರಪ್ಪ ಅವರಿಗೆ ಜಯ ಸಿಕ್ಕಿರಬಹುದು. ಆದರೆ, ಅಧಿಕಾರಕ್ಕಾಗಿ ಆಪರೇಷನ್ ನಡೆಸಿದ ತಪ್ಪಿಗೆ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಅಧಿಕಾರ ಉಳಿಸಿಕೊಳ್ಳಲು ಪಕ್ಷ ಮೂರು ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. ನಂತರದಲ್ಲಿ ಬಿಜೆಪಿ ಒಡೆದು ಹೋಳಾಯಿತು. ಯಾವ ಅಧಿಕಾರಕ್ಕಾಗಿ ಬಿಜೆಪಿಗೆ ಬಂದರೋ ಅವರಲ್ಲಿ ಬಹುತೇಕರು ಮೂಲ ಪಕ್ಷಕ್ಕೆ ವಾಪಸಾದರು. ನಂತರದ ಚುನಾವಣೆಯಲ್ಲಿ (2013) ಬಿಜೆಪಿ ಹೀನಾಯವಾಗಿ ಸೋಲಬೇಕಾಯಿತು. ಬಿಜೆಪಿ ತೊರೆದು ಯಡಿಯೂರಪ್ಪ ಕೆಜೆಪಿ ಕಟ್ಟಿದರೂ ದಯನೀಯವಾಗಿ ಸೋತು ಮತ್ತೆ ಬಿಜೆಪಿಯನ್ನೇ ಕೈಹಿಡಿಯಬೇಕಾಗಿ ಬಂತು.

ಈ ಮಧ್ಯೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಭಾವನಾತ್ಮಕವಾಗಿ ಜನವಿರೋಧಿ ನಿಲುವು ತೆಳೆದ ಪರಿಣಾಮ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆಗಲೂ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸುವ ಪ್ರಯತ್ನ ನಡೆಯಿತಾದರೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಕಾರಣ ಆಪರೇಷನ್ ಸಾಧ್ಯವಾಗದೆ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿಯಾಗಬೇಕಾಯಿತು. ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು.

ಹಾಗೆಂದು ಅವರಿಗೂ ಅಧಿಕಾರ ಎಂಬುದು ಹೂವಿನ ಹಾಸಿಗೆಯಾಗಿರಲಿಲ್ಲ. ಸರ್ಕಾರ ರಚನೆಯಾದ ದಿನದಿಂದಲೂ ಅಭದ್ರತೆಯಲ್ಲೇ ಕಾಲ ಕಳೆಯುವಂತಾಯಿತು. ಯಾವಾಗ ಶಾಸಕರು ಪಕ್ಷ, ಸಿದ್ಧಾಂತ, ಜನಾಭಿಪ್ರಾಯ ಬಿಟ್ಟು ಅಧಿಕಾರದ ಹಿಂದೆ ಬಿದ್ದರೋ ಆಗ ಇದೆಲ್ಲಾ ಸಾಮಾನ್ಯ. ಸರ್ಕಾರದ ಆಯಸ್ಸು ಎಷ್ಟು ದಿನ ಎಂದು ಎಣಿಸುತ್ತಲೇ 14 ತಿಂಗಳು ಕಾಲ ತಳ್ಳಬೇಕಾಯಿತು. ಅತೃಪ್ತರ ಗುಂಪನ್ನು ಒಡೆದು ಹಾಗೋ ಹೀಗೋ ಸರ್ಕಾರ ಉರುಳುವುದನ್ನು ಮುಂದೂಡಿಕೊಂಡು ಬಂದರೇ ಹೊರತು ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಯಿತಾದರೂ ಅಂತಿಮವಾಗಿ ಸರ್ಕಾರ ಉರುಳಿಬಿತ್ತು. ಆಪರೇಷನ್ ಕಮಲ ಯಶಸ್ವಿಯಾಗಿ ಮತ್ತೆ ಬಿಜೆಪಿಗೆ ಅಧಿಕಾರ ರಚಿಸುವ ಅವಕಾಶ ಸಿಕ್ಕಿತು.

ಇದಕ್ಕೆ ಕಾರಣವಾಗಿದ್ದು ಶಾಸಕರ ರಾಜಿನಾಮೆ. ಮೈತ್ರಿ ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ನಾವು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇವೆ ಎಂದು ಆ ಶಾಸಕರು ಎಷ್ಟೇ ಹೇಳಿದರೂ ಅದರ ಹಿಂದೆ ಆಪರೇಷನ್ ಕಮಲ ಇರುವುದು ಸುಳ್ಳಲ್ಲ. ರಾಜಿನಾಮೆ ನೀಡಿದ ಶಾಸಕರು ತಮ್ಮ ರಾಜಿನಾಮೆ ಅಂಗೀಕಾರವಾದರೆ ಅಥವಾ ಅನರ್ಹಗೊಂಡರೆ ಬಿಜೆಪಿಗೆ ಸೇರುವುದು ಖಂಡಿತ. ಹಾಗೆ ಬಿಜೆಪಿಗೆ ಸೇರಿ ಮತ್ತೆ ಗೆದ್ದು ಬಂದವರಿಗೆ ಅಧಿಕಾರ ಕೊಡಲೇ ಬೇಕು. ಇಲ್ಲದಿದ್ದರೆ ಮತ್ತೆ ಅವರು ಸರ್ಕಾರ ಪತನಕ್ಕೆ ಪ್ರಯತ್ನ ಆರಂಭಿಸುತ್ತಾರೆ. ಏಕೆಂದರೆ, ಪ್ರಸ್ತುತ ರಾಜಿನಾಮೆ ನೀಡಿದ ಶಾಸಕರ ಪೈಕಿ ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರೂ ಉಪಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಬಿನ್ನಮತ ಆರಂಭಿಸಿದವರು. ಅವರ ಬೆನ್ನಿಗೆ ನಿಂತಿದ್ದ ಇತರೆ ಶಾಸಕರು ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರೆ. ಹೀಗಾಗಿ ಬಿಜೆಪಿಗೆ ಸೇರಿ ಶಾಸಕರಾಗಿ ಆಯ್ಕೆಯಾದ ಮೇಲೆ ಅಧಿಕಾರ ಸಿಗದೇ ಇದ್ದರೆ ಅವರು ಮತ್ತೆ ಸರ್ಕಾರ ಪತನಕ್ಕೆ ಮುಂದಾಗುವ ತಮ್ಮ ಚಾಳಿ ಬಿಡುವುದಿಲ್ಲ.

ಈ ಬಾರಿ ಬಿಜೆಪಿಗೆ ಇನ್ನೂ ಕಷ್ಟ

2008ರಲ್ಲಿ ಅಧಿಕಾರಕ್ಕೆ ಬಂದಾಗ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಭದ್ರ ಮಾಡಿಕೊಂಡಿದ್ದ ಬಿಜೆಪಿಗೆ ಈ ಬಾರಿ ಸರ್ಕಾರ ಉಳಿಸಿಕೊಳ್ಳುವುದು ಬಹಳ ಕಷ್ಟ. ಪಕ್ಷಾಂತರಿಗಳಿಗೆ ಮಣೆ ಹಾಕಿ ಪಕ್ಷದಲ್ಲೇ ಇದ್ದು ಗೆದ್ದು ಬಂದವರಿಗೆ ಅಸಮಾಧಾನವಾಗುವುದು ಸಹಜ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಣವಂತರೇ (ಉದ್ಯಮ, ರಿಯಲ್ ಎಸ್ಟೇಟ್, ವ್ಯಾಪಾರ… ಹೀಗೆ ನಾನಾ ಮೂಲಗಳಿಂದ ಶ್ರೀಮಂತರಾದವರು) ಹೆಚ್ಚು. ಚುನಾವಣೆಯಲ್ಲಿ ಗೆದ್ದು ಬರಲು ಸಾಕಷ್ಟು ವೆಚ್ಚ ಮಾಡಿರುವ ಅವರು ಅದನ್ನು ವಾಪಸ್ ಪಡೆಯಲು ಅಧಿಕಾರ ಬಯಸುತ್ತಾರೆ. ಅದು ಸಿಗದೇ ಇದ್ದರೆ ಅವರಿಗೆ ಪಕ್ಷವೂ ಬೇಡ, ಸರ್ಕಾರವೂ ಬೇಡ. ಅಂತಹ ಅಸಮಾಧಾನ ಆಡಳಿತ ಪಕ್ಷದಲ್ಲಿ ಆರಂಭವಾದಾಗ ಅದರ ಎಲ್ಲಾ ಲಾಭ ಪಡೆಯಲು ಪ್ರತಿಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಿದ್ಧವಾಗಿರುತ್ತದೆ. ಅಧಿಕಾರಕ್ಕಾಗಿ ಶಾಸಕರಿಗೆ ಆಪರೇಷನ್’ ಯಾವ ರೀತಿ ಮಾಡಬೇಕು ಎಂಬುದಕ್ಕೆ ಬಿಜೆಪಿಯೇ ದಾರಿ ಹೇಳಿಕೊಟ್ಟಿದೆ. ಮೇಲಾಗಿ ತಮ್ಮ ಸರ್ಕಾರ ಉರುಳಿಸಿದ ಸಿಟ್ಟು ಬಿಜೆಪಿ ಮೇಲಿರುತ್ತದೆ. ಹೀಗಾಗಿ ಪ್ರತಿ ಹಂತದಲ್ಲೂ ಬಿಜೆಪಿ ಸರ್ಕಾರಕ್ಕೆ ಅಂತ್ಯ ಹಾಡಲು ತುದಿಗಾಲಲ್ಲಿ ನಿಲ್ಲುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅಸಮಾಧಾನಿತ ಆಡಳಿತ ಪಕ್ಷದವರನ್ನು ಸೆಳೆದು ಮತ್ತೆ ಅಧಿಕಾರಕ್ಕೆ ಬರಲು ಕಾಯುತ್ತಿರುತ್ತಾರೆ. ತಮ್ಮ ಗುರಿ ಈಡೇರಿಸಿಕೊಳ್ಳಲು ಆಡಳಿತ ಪಕ್ಷಕ್ಕೆ ತೊಂದರೆ ನೀಡುತ್ತಲೇ ಇರುತ್ತಾರೆ. ಹೀಗಾಗಿ ಸದ್ಯ ಅಲ್ಪವಿರಾಮ ಬೀಳುತ್ತಿರುವ ರಾಜಕೀಯ ‘ಕರ್-ನಾಟಕ’ ಕೆಲ ದಿನಗಳ ನಂತರ ಮತ್ತೆ ಮುಂದುವರಿಯುವುದು ಸ್ಪಷ್ಟ.

RS 500
RS 1500

SCAN HERE

don't miss it !

ಭಾರತ ವಿರುದ್ಧದ ಟೆಸ್ಟ್‌ ತಂಡ ಪ್ರಕಟ: ಆಂಡರ್ಸನ್‌, ಸ್ಯಾಮ್‌ ಬಿಲ್ಲಿಂಗ್ಸ್‌ಗೆ ಸ್ಥಾನ!
ಕ್ರೀಡೆ

ಭಾರತ ವಿರುದ್ಧದ ಟೆಸ್ಟ್‌ ತಂಡ ಪ್ರಕಟ: ಆಂಡರ್ಸನ್‌, ಸ್ಯಾಮ್‌ ಬಿಲ್ಲಿಂಗ್ಸ್‌ಗೆ ಸ್ಥಾನ!

by ಪ್ರತಿಧ್ವನಿ
June 30, 2022
ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಎಸಿಬಿ ವಶಕ್ಕೆ
ಕರ್ನಾಟಕ

ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಎಸಿಬಿ ವಶಕ್ಕೆ

by ಪ್ರತಿಧ್ವನಿ
July 4, 2022
ದೇಶ

ಆಂಧ್ರ ಪ್ರದೇಶಕ್ಕೆ ಪ್ರಧಾನಿ ಭೇಟಿ: ನಟ ಚಿರಂಜೀವಿಗೆ ವಿಶೇಷ ಆಹ್ವಾನ

by ಪ್ರತಿಧ್ವನಿ
June 29, 2022
ಪಾತಾಳಕ್ಕೆ ಕುಸಿದರೂ ಜಾಗತಿಕವಾಗಿ ರೂಪಾಯಿ ಉತ್ತಮ ಮಟ್ಟದಲ್ಲಿದೆ : ಮಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ದೇಶ

ಪಾತಾಳಕ್ಕೆ ಕುಸಿದರೂ ಜಾಗತಿಕವಾಗಿ ರೂಪಾಯಿ ಉತ್ತಮ ಮಟ್ಟದಲ್ಲಿದೆ : ಮಿತ್ತ ಸಚಿವೆ ನಿರ್ಮಲಾ ಸೀತಾರಾಮನ್

by ಪ್ರತಿಧ್ವನಿ
July 1, 2022
ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರೆ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!
ದೇಶ

ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರೆ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!

by ಪ್ರತಿಧ್ವನಿ
July 3, 2022
Next Post
ಮೂಲ ಜನತಾ ಪರಿವಾರದ ಸಂಸದೀಯ ಪಟುಗಳದ್ದೇ ಪ್ರಾಬಲ್ಯ

ಮೂಲ ಜನತಾ ಪರಿವಾರದ ಸಂಸದೀಯ ಪಟುಗಳದ್ದೇ ಪ್ರಾಬಲ್ಯ

ಪಕ್ಷಾಂತರ ನಿಷೇಧ ಕಾಯ್ದೆಯಿಂದ ಮತದಾರರಿಗೆ ಆದ ಮೋಸ  

ಪಕ್ಷಾಂತರ ನಿಷೇಧ ಕಾಯ್ದೆಯಿಂದ ಮತದಾರರಿಗೆ ಆದ ಮೋಸ  

ವರ್ಷವಾಗುತ್ತಾ ಬಂದರೂ ಸಂತ್ರಸ್ತರ ಮನೆಗಳ ಹಸ್ತಾಂತರವಿಲ್ಲ

ವರ್ಷವಾಗುತ್ತಾ ಬಂದರೂ ಸಂತ್ರಸ್ತರ ಮನೆಗಳ ಹಸ್ತಾಂತರವಿಲ್ಲ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist