Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಅಂಧ ಮಕ್ಕಳ ಮೇಲೆ ಸರ್ಕಾರದ ಕುರುಡು ದರ್ಬಾರ್!‌

ಅಂಧ ಮಕ್ಕಳ ಮೇಲೆ ಸರ್ಕಾರದ ಕುರುಡು ದರ್ಬಾರ್!‌
ಅಂಧ ಮಕ್ಕಳ ಮೇಲೆ ಸರ್ಕಾರದ ಕುರುಡು ದರ್ಬಾರ್!‌

February 13, 2020
Share on FacebookShare on Twitter

ಸಾರ್ವಜನಿಕರು ಪ್ರತಿಭಟನೆ ಮಾಡೋದು ಸಂವಿಧಾನ ಕೊಟ್ಟ ಮೂಲಭೂತ ಹಕ್ಕು. ಆಡಳಿತ ಪಕ್ಷದ ವೈಫಲ್ಯಗಳನ್ನು ತೋರಿಸುವ ಮಾರ್ಗಗಳಲ್ಲಿ ಪ್ರತಿಭಟನೆಯೇ ಪ್ರಮುಖ ಅಸ್ತ್ರ. ಈ ಪ್ರತಿಭಟನೆಯನ್ನು ತಾಳ್ಮೆಯಿಂದ ಆಲಿಸಬೇಕಾದ ಕೆಲಸವನ್ನು ಆಡಳಿತ ಮಾಡುವ ಮಂದಿ ಮಾಡಬೇಕು. ಸಮಸ್ಯೆಯನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕು. ಆದರೆ ಬಿಜೆಪಿ ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪ್ರತಿಭಟನೆ ಮಾಡುವುದನ್ನು ತಡೆದು, ಹೋರಾಟದ ದನಿಯನ್ನು ಮುಚ್ಚಿಡುವ ಕೆಲಸವನ್ನು ಸಕಲ ರೀತಿಯಲ್ಲೂ ಮಾಡುತ್ತಿದೆ. ಇದೇ ರೀತಿಯ ಕೆಲಸವನ್ನು ಅಂಧ ವಿದ್ಯಾರ್ಥಿಗಳ ಮೇಲೂ ಪ್ರಯೋಗ ಮಾಡಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ಪ್ರಧಾನಿ ನರೇಂದ್ರ ಮೋದಿ ಅಂಗವಿಕಲ ಮಕ್ಕಳನ್ನು ವಿಶೇಷ ಚೇತನ ಮಕ್ಕಳು ಎಂದು ಕರೆಯಿರಿ, ಆ ಮಕ್ಕಳು ದೇವರಿಗೆ ಸಮಾನ ಎಂದು ಭಾಷಣ ಮಾಡ್ತಾರೆ. ಆದರೆ ಈಗ ಅದೇ ಬಿಜೆಪಿಯ ಆಡಳಿತ ಇರುವಂತಹ ರಾಜ್ಯ ಸರ್ಕಾರ ಅಂಧ ಮಕ್ಕಳ ಮೇಲೆ ಕುರುಡು ದರ್ಬಾರ್‌ ನಡೆಸಿದೆ. ಪ್ರತಿಭಟನೆ ನಡೆಸುತ್ತಿದ್ದ ಮಕ್ಕಳನ್ನು ಪೊಲೀಸ್‌ ವ್ಯಾನ್‌ಗಳಲ್ಲಿ ತುಂಬಿಕೊಂಡು ನಾಲ್ಕಾರು ಕಿಲೋ ಮೀಟರ್‌ ದೂರ ಕರೆದುಕೊಂಡು ಹೋಗಿ ಕ್ರೀಡಾಂಗಣದಲ್ಲಿ ಬಿಟ್ಟು ಬಂದಿರುವುದು ನ್ಯಾಯಯುತವೇ? ಇದು ಮಾನವೀಯತೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರ್ಕಾರ ತನ್ನ ಹುಳುಕನ್ನು ಮುಚ್ಚಿಟ್ಟುಕೊಳ್ಳಲು ಈ ರೀತಿಯಾಗಿ ಪೊಲೀಸ್‌ ಪಡೆ ಬಳಸಿ ಹೋರಾಟ ಹತ್ತಿಕ್ಕುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅಂಧ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಸರ್ಕಾರ ಉಚಿತ ಲ್ಯಾಪ್‌ಟಾಪ್‌ ಕೊಡುವ ಯೋಜನೆಯನ್ನು 2014ರಲ್ಲಿ ಘೋಷಣೆ ಮಾಡಿತ್ತು. ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟ ಅಂಧ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಕೊಡುವುದಾಗಿ ಘೋಷಣೆ ಮಾಡಿ 6 ವರ್ಷಗಳಾದರೂ ಕೂಡ ಇನ್ನು ಲ್ಯಾಪ್‌ಟಾಪ್‌ ವಿತರಣೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಶ್ರೀಮಂತ ಕುಟುಂಬಗಳ ಮಕ್ಕಳು ಲ್ಯಾಪ್‌ಟಾಪ್‌ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಸ್ವಂತ ಹಣದಿಂದ ಖರೀದಿ ಮಾಡುತ್ತಾರೆ. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿರುವ ಹಾಗು ಎನ್‌ಜಿಒಗಳು ನಡೆಸುವ ಪೋಷಣಾ ಮಂದಿರದಲ್ಲಿ ವಾಸ ಮಾಡುವ ಅಂಧ ವಿದ್ಯಾರ್ಥಿಗಳು ಸರ್ಕಾರದ ನೆರವನ್ನೇ ನಂಬಿಕೊಂಡು ಇರುತ್ತಾರೆ.

ವಿಧಾನಸೌಧ ಬಳಿಯ ವಿಶ್ವೇಶ್ವರಯ್ಯ ಟವರ್‌ ಬಳಿ ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರಣ ಸಬಲೀಕರಣ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡಲು 40 ಮಂದಿ ಅಂಧ ವಿದ್ಯಾರ್ಥಿಗಳು ಆಗಮಿಸಿದ್ದರು. ಒಂದೂವರೆ ಗಂಟೆ ಬಳಿಕ ನಿರ್ದೇಶಿಕಿ ಲೀಲಾವತಿ ಭೇಟಿಗೆ ಅವಕಾಶ ಕೊಡಲಾಯ್ತು. ಆದರೆ ಕೇವಲ ನಾಲ್ಕು ಜನರ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಲಾಯ್ತು. ಇದರಿಂದ ಉಳಿದ ವಿದ್ಯಾರ್ಥಿಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದರು.

ಕಳೆದೆರಡು ವರ್ಷಗಳಿಂದ ಚುನಾವಣೆ ಇದ್ದಿದ್ದರಿಂದ ನಮಗೆ ಟೆಂಡರ್‌ ಕರೆಯಲು ಸಾಧ್ಯವಾಗಿಲ್ಲ ಎಂದು ನಿರ್ದೇಶಕಿ ಲೀಲಾವತಿ ಹೇಳಿದ್ದಾರೆ. ಈಗ ಟೆಂಡರ್‌ ಕರೆದು ಲ್ಯಾಪ್‌ಟಾಪ್‌ ವಿತರಣೆ ಮಾಡುವ ಭರವಸೆ ನೀಡಿದ್ದಾರೆ. ಆದರೆ ಅಸಮಾಧಾನಕೊಂಡ ಅಂಧ ಮಕ್ಕಳನ್ನು ಸಮಾಧಾನ ಮಾಡುವಲ್ಲಿ ಎಡವಿದ್ದಾರೆ. ಪೊಲೀಸರನ್ನು ಕರೆಸಿ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಪೊಲೀಸರು ಹೆಣ್ಣು ಮಕ್ಕಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳನ್ನು ಜೀಪ್‌ಗಳಲ್ಲಿ ತುಂಬಿಕೊಂಡು ಹೋಗಿ ಲಾಂಗ್‌ಫೋರ್ಡ್‌ ನಗರದ ಹಾಕಿ ಸ್ಟೇಡಿಯಂನಲ್ಲಿ ಇಟ್ಟು ರಾತ್ರಿ ಬಿಟ್ಟು ಕಳುಹಿಸಿದ್ದಾರೆ. ಅಂಧ ಮಕ್ಕಳು ಎನ್ನುವ ಕನಿಕರವಿಲ್ಲದೇ ಅವರು ದಾರಿಯಲ್ಲಿ ಪರದಾಡುವ ಪರಿಸ್ಥಿತಿಯನ್ನು ತಂದೊಡ್ಡಿರುವ ನಮ್ಮ ಆರಕ್ಷಕ ಪಡೆ 40 ಮಕ್ಕಳನ್ನು ಬೆಳಗ್ಗೆಯಿಂದ ಕೂಡಿಟ್ಟು ಕತ್ತಲಾದ ಮೇಲೆ ಬಿಟ್ಟು ಕಳುಹಿಸಿರುವುದು ಅಮಾನವೀಯತೆಗೆ ಸಾಕ್ಷಿಯಾಗಿ ನಿಂತಿದೆ.

ಸರ್ಕಾರ ಯೋಜನೆಗಳನ್ನ ಘೋಷಣೆ ಮಾಡುತ್ತದೆ. ಆದರೆ ಜಾರಿ ಮಾಡುವುದಿಲ್ಲ. ಕೇಳಿದರೆ ಪೊಲೀಸರನ್ನು ಬಿಟ್ಟು ಬೆದರಿಸುವ ಕೆಲಸ ಮಾಡುತ್ತದೆ. ಆದರೆ ಅಧಿಕಾರಿಗಳು ಸ್ವಲ್ಪ ಮುತುವರ್ಜಿ ವಹಿಸಿದರೆ, ಅಂಧ ಮಕ್ಕಳ ಸಮಸ್ಯೆ ಬಗೆಹರಿಸುವುದು ದೊಡ್ಡ ಕಷ್ಟವೇನಲ್ಲ. ಸಾಕಷ್ಟು ಜನರು ಮಕ್ಕಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುತ್ತಾರೆ. ದೊಡ್ಡ ದೊಡ್ಡ ಎಂಎನ್‌ಸಿ ಕಂಪನಿಗಳು ಸಹ ಈ ರೀತಿಯ ಮಕ್ಕಳ ನೆರವಿಗೆ ಬರಲು ಸಿದ್ಧರಿರುತ್ತಾರೆ. ಆದರೆ ಹೇಗೆ ಸಹಾಯ ಮಾಡುವುದು ಎನ್ನುವುದು ಗೊತ್ತಿರುವುದಿಲ್ಲ. ಅಂತವರನ್ನು ಗುರುತಿಸಿ ಸಹಾಯ ಹಸ್ತ ಚಾಚುವಂತೆ ಮಾಡುವುದು ದೊಡ್ಡ ಕಷ್ಟವೇನಲ್ಲ. ಆ ಕೆಲಸ ಮಾಡುವ ಜವಾಬ್ದಾರಿ ಇರಬೇಕು. ನಾನು ಸರ್ಕಾರಿ ಅಧಿಕಾರಿ ಎನ್ನುವ ಧಿಮಾಕು ಬಿಟ್ಟು ಕೆಲಸ ಮಾಡುವ ಮನಸ್ಸಿರಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಅಂಧ ಮಕ್ಕಳ ಬಾಳಲ್ಲಿ ಬೆಳಕು ಮೂಡುತ್ತದೆ. ಪ್ರತಿಭಟನೆ ಮಾಡುವ ಮಕ್ಕಳನ್ನು ಕತ್ತಲಿಗೆ ತೆಗೆದುಕೊಂಡು ಹೋಗುವುದೂ ತಪ್ಪಲಿದೆ. ಈ ಬಗ್ಗೆ ಸರ್ಕಾರ ಹಾಗು ಸಚಿವರು ಚಿಂತಿಸಬೇಕಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಚುನಾವಣಾ ಸಮೀಕ್ಷೆಗೆ ಬೆದರಿದ ಬಿಜೆಪಿ: ಬಿಎಸ್‌ವೈ ತುರ್ತು ಪತ್ರಿಕಾಗೋಷ್ಠಿ
Top Story

ಚುನಾವಣಾ ಸಮೀಕ್ಷೆಗೆ ಬೆದರಿದ ಬಿಜೆಪಿ: ಬಿಎಸ್‌ವೈ ತುರ್ತು ಪತ್ರಿಕಾಗೋಷ್ಠಿ

by ಪ್ರತಿಧ್ವನಿ
March 30, 2023
ʻಗುರುದೇವ್‌ ಹೊಯ್ಸಳʼ ಸಕ್ಸಸ್‌.. ಡಾಲಿಗೆ ಕಾರ್‌ ಗಿಫ್ಟ್‌..!
ಸಿನಿಮಾ

ʻಗುರುದೇವ್‌ ಹೊಯ್ಸಳʼ ಸಕ್ಸಸ್‌.. ಡಾಲಿಗೆ ಕಾರ್‌ ಗಿಫ್ಟ್‌..!

by ಪ್ರತಿಧ್ವನಿ
March 31, 2023
ಬಿಎಸ್​ವೈ ಮನೆ ಮೇಲೆ ಕಲ್ಲು ತೂರಾಟ ; ಪ್ರಚೋದನೆಗೆ ಬಂಜಾರ ಸಮುದಾಯ ಒಳಗಾಗಬಾರದು : ಸಿಎಂ ಮನವಿ
Top Story

ಬಿಎಸ್​ವೈ ಮನೆ ಮೇಲೆ ಕಲ್ಲು ತೂರಾಟ ; ಪ್ರಚೋದನೆಗೆ ಬಂಜಾರ ಸಮುದಾಯ ಒಳಗಾಗಬಾರದು : ಸಿಎಂ ಮನವಿ

by ಮಂಜುನಾಥ ಬಿ
March 27, 2023
ನಾಳೆಯಿಂದ ʻಗುರುದೇವ್‌ ಹೊಯ್ಸಳʼನ ಆರ್ಭಟ ಶುರು
ಸಿನಿಮಾ

ನಾಳೆಯಿಂದ ʻಗುರುದೇವ್‌ ಹೊಯ್ಸಳʼನ ಆರ್ಭಟ ಶುರು

by ಪ್ರತಿಧ್ವನಿ
March 29, 2023
ಬೆಡ್‌ರೂಮ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆಗಿನ ಫೋಟೋ ಶೇರ್‌ ಮಾಡಿದ ನಟಿ..!
ಸಿನಿಮಾ

ಬೆಡ್‌ರೂಮ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆಗಿನ ಫೋಟೋ ಶೇರ್‌ ಮಾಡಿದ ನಟಿ..!

by ಪ್ರತಿಧ್ವನಿ
March 29, 2023
Next Post
ಈ ವರ್ಷದ ಪ್ರಶ್ನೆ ಪತ್ರಿಕೆಯನ್ನು ಕಳೆದ ವರ್ಷವೇ ತಯಾರಿಸಿದ ಪಿಯು ಮಂಡಳಿ

ಈ ವರ್ಷದ ಪ್ರಶ್ನೆ ಪತ್ರಿಕೆಯನ್ನು ಕಳೆದ ವರ್ಷವೇ ತಯಾರಿಸಿದ ಪಿಯು ಮಂಡಳಿ

ಸರೋಜಿನಿ ಮಹಿಷಿ  ವರದಿಯಲ್ಲಿನ ಶಿಫಾರಸ್ಸುಗಳೇನು? ಇದನ್ನು ಜಾರಿಗೊಳಿಸಲು ಮೀನಾಮೇಷವೇಕೆ?

ಸರೋಜಿನಿ ಮಹಿಷಿ ವರದಿಯಲ್ಲಿನ ಶಿಫಾರಸ್ಸುಗಳೇನು? ಇದನ್ನು ಜಾರಿಗೊಳಿಸಲು ಮೀನಾಮೇಷವೇಕೆ?

ಅಂಧ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

ಅಂಧ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist